ಸಚಿನ್ ಕಾರಬಾರಿ ಎಂದಾಕ್ಷಣ ನೆನಪಾಗುವುದು ಭಾಷಣ,ಸಂಚಾಲನೆ,ಸಾಹಿತ್ಯ,ಶಿಕ್ಷಣ, ಸಂಶೋಧನೆ,ಅಭಿನಯ,ವಾದ-ವಿವಾದ ಅಬ್ಬಬ್ಬಾ ಒಂದಾ ಎರಡಾ? ಇದೀಗ ಸಚಿನ್ ಕಾರಬಾರಿವರ "ಅಂತರಂಗದ ರಂಗ" ಕವನ ಸಂಕಲನ
ಕಣ್ತೆರೆಯುತ್ತಿದ್ದು, ಪದವಿಯ ಪ್ರಥಮ ಹಂತದಲ್ಲೇ ಎರಡು ಪುಸ್ತಕಗಳನ್ನು ಪ್ರಕಟಿಸಿದ ಸಾಹಿತ್ಯ ಸಾರಥಿ, ಆತನಲ್ಲಿ ಸದಾ ಏನೋ ಹೊಸತನ ಹೊರಳಾಡುತ್ತಿರುತ್ತದೆ, ಆತನ ಕಂಗಳಲ್ಲಿ ಒಂಥರಾ ರೋಮಾಂಚನ ಎದ್ದು ಕಾಣುತ್ತದೆ, ನೋಡಲು ಇಳೆ ವಯಸ್ಸಿನ ಎಳೆ ಹುಡುಗನಾದರೂ ವಿಚಾರಗಳು ಬಾನೆತ್ತರದವೂ, ಮೂಲತಃ ಭಾಲ್ಕಿಯವನಾದ ಈತ ಶಿವಶಂಕರ ಕಾರಬಾರಿ ಹಾಗೂ ಕಲ್ಪನಾ ಕಾರಬಾರಿಯವರ ಮಗನಾಗಿ ಜನಿಸಿದ್ದು, ಕ್ರಷಿ ಕುಟುಂಬದಿಂದ ಬೆಳೆದು ಬಂದವನಾಗಿದ್ದಾನೆ, ಬಾಲ್ಯದಿಂದಲೇ ಸಾಹಿತ್ಯ, ಸಂಚಾಲನೆ,ಭಾಷಣ,ಅಭಿನಯದಲ್ಲಿ ಎತ್ತಿದ ಮೇಲು ಗೈ ಈತನದ್ದು, ಕಲಾ ಎಂದರೆ ಕಮ್ಮಿ ಎನ್ನುವ ಈ ಕಾಲದಲ್ಲೂ ಕಲೆಗೆ ಭಲೆ! ಎನ್ನುವಂತೆ ಬೆಳೆಯುತ್ತಿರುವವರು ಸಚಿನ್ ಕಾರಬಾರಿ ಹೆಸರಲ್ಲೇ ಕಾರಬಾರಿ ಹೊಂದಿರುವ ಈತ ಎಲ್ಲಾ ರಂಗದಲ್ಲೂ ತನ್ನ ಕಾರಬಾರದ ರಂಗನ್ನು ಮೂಡಿಸಿದ್ದಾನೆ, ಪದವಿಯ ಜೊತೆಯಲ್ಲಿ ಸಂಶೋಧನೆಗೂ ಕೈ ಹಾಕಿದ್ದಾನೆ.
ತಿಂಗಳ ಹಿಂದೆಯೇ ಉತ್ತರದಿಂದ ದಕ್ಷಿಣಕ್ಕೆ ಪಯಣ ಎನ್ನುವ ಪ್ರವಾಸ ಕಥನ ಪ್ರಕಟಗಳಿದ್ದಾನೆ.
ಅವರ ಅಂತರಂಗದ ರಂಗ ಕವನ ಸಂಕಲನಕ್ಕೆ ಬರೆದ ಹಿತನುಡಿಗಳು ಇಂತಿವೆ.ಯುವ ಕವಿಯೊಬ್ಬನ ಮನದ ರಂಗು ರಂಗಿನ ಭಾವನೆಗಳು "ಅಂತರಂಗದ ರಂಗ" ಕವನ ಸಂಕಲನದಲ್ಲಿ ಸಪ್ತವರ್ಣ ಸೇರಿದ ಶುಭ್ರ ಬೆಳದಿಂಗಳಾಗಿವೆ. ಪ್ರೀತಿ,ಪ್ರೇಮ,ವಾತ್ಸುಲ್ಯದ ಈ ವಿಹಾರಿಯಾದ ಕವಿ, ದೇಶ-ದೇವರನ್ನು ಸ್ಮರಿಸಿ ಕಂದಬಾರದ ಕಂದನಲ್ಲವೆಂದು ಸಾರಿ ಪ್ರಶೀತಿಯ ಪ್ರಚಾರಕನು ಆಗಿದ್ದಾನೆ, ಜಾತಿ,ಮತ,ಕುಲಗಳಿಂದ ಹರಿದ ನೆತ್ತರ ಒಂದೇ ಎಂದು ಬಿತ್ತರಿಸಿ, ಶಾಂಯಿಯ ಮಂತ್ರ ನೀಡಿದ್ದು ರೋಮ ರೋಮದ ರೋಷ ಇಲ್ಲಿ ಇಣಕಿದೆ, ಮೇಘ ಮಧ್ಯದಿ ದೂತ ನಾನು, ಎಂದು ಕವಿ ಜನಪದ ಶೈಲಿ ಪ್ರೇಮ ಭಾವಗೀತೆಗಳು ಬರೆದು ವಿಷಾದದ ವಿಷಯ ಪ್ರಸ್ತಾಪಿಸಿ, ರವಿಗೂ ಕವಿಗೂ ಕಣ್ಣ್ತೆವಗೊಲಿಸುವಂತೆ, ಎಂದು ಹೇಳಿ ಓದುಗರಿಗೂ ಕಣ್ತೆವಗೊಳಿಸಿದ್ದಾನೆ, ಅಮ್ಮನ ಮಡಿಲಿನ ಕರುಳ ಪ್ರೀತಿಯಷ್ಟೇ ಅಪ್ಪನ ಬೆರಳ ಪ್ರೀತಿಗೂ ಬೆಲೆಕೊಟ್ಟು, ಯಾವ್ಹನದ ಹೊಳೆಯಲ್ಲಿ ಈಜಿ, ಇಂದೃಯಗಳನವ ಸೇರಿಸಿ ಕವನ ಬರೆ