“ಕೋವಿಡ್ 19” ಎಂಬ “ರಾವಣ”ನಂತಹ ಅಸುರನು ಜಗತ್ತಿಗೆ ಭಯಪಡಿಸಿದ್ದು ಎಲ್ಲರ ಮನದಲ್ಲಿ ಅಚ್ಚು ಹಾಕಿದಂತಿದೆ. ಭಿನ್ನ ಭಿನ್ನ ವಯಸ್ಸಿನ ಎಷ್ಟೋ ಜನರು ಈ ಕಷ್ಟಕ್ಕೆ ಬಲಿಯಾದರು. ಮನಸ್ಸಿನ ವೇದನೆ ಅಳಿಯಲಾರದಂತದು. ಲೇಖಕರ ಹಾಗೆ ಅನುಭವಿಸಿದರೆ ಅದರ ಬಗ್ಗೆ ಗೊತ್ತಾಗುವುದು. ಯಾರು ಇಂತಹ ಯಾತನೆಗೆ ಒಳಗಾಗಬಾರದೆಂದು ದೇವರಲ್ಲಿ ಪ್ರಾರ್ಥನೆ. ಕಾಯಿಲೆ ವಾಸಿ ಮಾಡಲು ಹೆಚ್ಚಿನ ಶಕ್ತಿಯಾಗಿ ದೇವರ ರೂಪದಲ್ಲಿ ಬಂದ ವೈದ್ಯರು, ಔಷಧಿ, ಪ್ರಮುಖವಾಗಿ ಅವುಗಳಲ್ಲಿ ಇಟ್ಟ ನಂಬಿಕೆ ಅವರನ್ನು ಕಾಪಾಡಿತು. ಹನುಮನ ಬಗ್ಗೆ ಕವನ ಬರೆಯಲು ಇದೇ ಒಂದು ಸ್ಪೂರ್ತಿ ಆಯಿತು. ಅದೇ ಬರಹ ಪರಿವರ್ತಿಸಿ, ಹನುಮನ ಪ್ರಭುಗಳಾದ ಶ್ರೀರಾಮನಾಮದಲ್ಲಿ ಮುಂದೆ “ರಾಮಾಯಣ ಮಹಾಕಾವ್ಯ”ಎಂದು ರೂಪಗೊಂಡಿತು.
“ಹನುಮದಾಸ”, ಎಂಬ ಕಾವ್ಯನಾಮ ಇಟ್ಟುಕೊಂಡು, ಈ ಕಾವ್ಯವನ್ನು “ಹನುಮದಾಸನ ರಾಮಾಯಣ ಮಹಾಕಾವ್ಯ” ಎಂಬ ಹೆಸರಿನ ಕೃತಿಯನ್ನಾಗಿ ರಚಿಸಲಾಗಿದೆ. ವಾಲ್ಮೀಕಿ ರಾಮಾಯಣ, ಟಿವಿ ಹಾಗು ಪೌರಾಣಿಕ ಚಲನಚಿತ್ರಗಳಿಂದ ಸ್ಪೂರ್ತಿಗೊಂಡ ಕವಿ, ಮೂಲ ರಾಮಾಯಣದ ಸಾರ ಬದಲಾಗದಂತೆ, ಹಾಸ್ಯ ಮತ್ತು ವಿನೋದದ ಮಾತುಗಳನ್ನು ಉಪಯೋಗಿಸಿ ಈ ಕಾವ್ಯವನ್ನು ಓದುವವರಿಗೆ ಉತ್ಸಾಹ ತುಂಬಿದ್ದಾರೆ. ಧರ್ಮಾಧರ್ಮದಿ ಹೋರಾಡಿದ ಎಷ್ಟೋ ಪಾತ್ರಗಳನ್ನು ವಿವರಿಸಿದ್ದಾರೆ. ಶ್ರೀರಾಮನ ಸೇವೆ ಮಾಡುವ ವಾನರರು, ನಾಯಕತ್ವದ ನೀತಿ ಪಾಠಗಳು, ಪರಾಕ್ರಮ, ತ್ಯಾಗ, ನಿಷ್ಠೆ, ಭಗವಂತ ಹಾಗೂ ಕರ್ತವ್ಯಗಳಲ್ಲಿ ತೋರಿಸಿದ ಭಕ್ತಿ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿದಂತೆ ಅದನ್ನು ಕವಿಯು ತಮ್ಮ ಅಕ್ಷರಗಳಲ್ಲಿ ಬರೆದಿದ್ದಾರೆ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners