Experience reading like never before
Sign in to continue reading.
10 Years of Celebrating Indie Authors
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal
ಚೆನ್ನುಡಿ
" ಕಾಲಾಯ ತಸ್ಮೈ ನಮಃ " ಎಂಬುದು ಭರ್ತ್ರ್ ಹರಿ ಕವಿಯ ಉಕ್ತಿ. ಎಲ್ಲ ದೃಷ್ಟಿಗಳಿಂದಲೂ ಅರ್ಥಪೂರ್ಣವಾದದ್ದು. ಕಾಲಾಯ ಎಂಬುದನ್ನ ’ ಕಲಾಯ ’ ಎಂದು ಮಾರ್ಪಡಿಸಿಕೊಂಡರೂ ತಪ್ಪಲ್ಲ. ಕಾಲಕ್ಕೆ ತಕ್ಕಂತೆ ಕ
ಚೆನ್ನುಡಿ
" ಕಾಲಾಯ ತಸ್ಮೈ ನಮಃ " ಎಂಬುದು ಭರ್ತ್ರ್ ಹರಿ ಕವಿಯ ಉಕ್ತಿ. ಎಲ್ಲ ದೃಷ್ಟಿಗಳಿಂದಲೂ ಅರ್ಥಪೂರ್ಣವಾದದ್ದು. ಕಾಲಾಯ ಎಂಬುದನ್ನ ’ ಕಲಾಯ ’ ಎಂದು ಮಾರ್ಪಡಿಸಿಕೊಂಡರೂ ತಪ್ಪಲ್ಲ. ಕಾಲಕ್ಕೆ ತಕ್ಕಂತೆ ಕಲಾವತಾರಗಳು;
ಕವಿತಾ ಪ್ರಕಾರಗಳು !
ವರ್ತಮಾನ ಕಾಲ ಹನಿಗವನ(ಚುಟುಕು)ಗಳ ಯುಗ. ಒಂದು ಕಡೆ ಮಹಾಕಾವ್ಯಗಳು; ಇನ್ನೊಂದು ಕಡೆ ಅವುಗಳೊಂದಿಗೆ ಸ್ಪರ್ಧಿಸುವಂತೆ ಮಹಾ ’ವಾಕ್ಯ’, ಅರ್ಥಾತ್ ಚುಟುಕುಗಳಣ ಇಂಥ ಪದ್ಯದಪರಿಧಿಯೊಳಕ್ಕೆ ಲೇಖಕರ ಪ್ರಶಸ್ತ ಪ್ರವೇಶ !
ಚಕ್ರವ್ಯೂಹವ?? ಹೊಕ್ಕಿದ್ದಾರೆ, ಈ ಅಭಿಮನ್ಯು; ಅಷ್ಟು ಮೋಹಕವಾದದ್ದು, ಮಾರಕವಾದುದಲ್ಲ,ಬಿಂದು ಪದ್ಯ ಪ್ರಪಂಚ.
ಈ ಕವಿ ತಮ್ಮನ್ನು "ಅನಾಮಿಕ" ಎಂದು ವಿನಯಪೂರ್ವಕ ಕರೆದುಕೊಂಡಿದ್ದಾರೆ. ಅನಾಮಿಕ ಅಲ್ಲ, ಅನೇಕ ಮುಖ, ಅನನ್ಯಮುಖ ಎನ್ನಬಹುದು ! ಬದುಕಿನ ವೈಚಿತ್ರ್ಯ, ವೈವಿಧ್ಯಗಳು, ತಿರುವು, ಮುರುವು ಮರ್ಮಗಳು, ಪತ್ಯ, ಮಿಥ್ಯ, ಮಾಯೆಗಳು, ಸಿಹಿಕಹಿಗಳು, ಪ್ರಕೃತಿ ವಿಕೃತಿಗಳು ಇಲ್ಲಿನ ’ಹನಿ-ಕುಡಿ ಕವನ’ ಗಳಲ್ಲಿ ಪ್ರತಿಫಲಿತವಾಗಿವೆ. ಗಾಂಭೀರ್ಯ, ಹಾಸ್ಯ, ವಿಡಂಬನೆ, ಚಮತ್ಕಾರಗಳ
ಚದುರಂಗದಾಟವನ್ನು ಇಲ್ಲಿ ಕಂಡು ವಿ’ಸ್ಮಿತ’ರಾಗುತ್ತೇವೆ !
ದಿಟ, ಕೆಲವು ರಚನೆಗಳು ಪ್ರಾಸಗಳ ಹಾಸಿಗೆ ಬಲಿಯಾಗಿವೆ; ಆದರೆ ಬಹುತೇಕ ಮುಕ್ತಕಗಳು ಪ್ರಾಸ ’ಮುಕ್ತ’ವಾಗಿ ಉತ್ತಮಿಕೆಯ ಕಡೆಗೆ ಹಸ್ತಚಾಚಿವೆ ಎಂಬುದನ್ನು ಒಪ್ಪಬೇಕು !
ಒಟ್ಟಿನ ಮೇಲೆ ಇಲ್ಲುಂಟು ಆಸ್ವಾದ್ಯವಾದ, ಯಾವುದೂ ಅಸಾಧ್ಯವೆನಿಸದ ಕವನ ಪರಂಪರೆ. ಸಾಮಾನ್ಯವಾದ, ಅಂತೆಯೆ ಮಾನ್ಯ ರೋಚಕವಾದ ಹನಿಗಳು ಇಲ್ಲಿ ಮನೆ ಮಾಡಿವೆ. ಮತ್ತೊಂದು ಗಮನಾರ್ಹ ಅಂಶ; ಇಲ್ಲಿ ಸಮಕಾಲೀನತೆಯಿದೆ; ಅದಕ್ಕನುಗುಣವಾಗಿ ಭಾಷೆಯ ಮೇಲೆ ಹಿಡಿತವಿದೆ.
ಹಿಂದು ಇಂದುಗಳನ್ನು ಧ್ವನಿಸುವ ಒಂದೇ ಒಂದು ಪದ್ಯವನ್ನು ಉದ್ದರಿಸಿ ಮುಗಿಸಬಹುದು :
ಸತ್ಯ, ಅಹಿಂಸೆ, ಧರ್ಮ
ಹಿಂದಿನವರ ಗಳಿಕೆ
ಇಂದಿಗೆ ಅವೆಲ್ಲ
ಕೇವಲ ಪಳೆಯುಳಿಕೆ !
ಪೂರ್ತಿ ’ ಪಳೆಯುಳಿಕೆ ’ ಯಲ್ಲದ, ಫಳಫಳಿಸುವ ಕವನಸರಣಿಯನ್ನು ಕೊಟ್ಟಿರುವ ಕವಿಗೆ ಅಭಿನಂದನೆಗಳು. ಈ ಪ್ರಗತಿಪರತೆ , ಫಸಲು ಹೆಚ್ಚಲಿ ; ಸಹೃದಯ ರಸಿಕರಿಗೆ ಮೆಚ್ಚಾಗಲಿ !
ಡಾ || ಸಿ.ಪಿ.ಕೆ.
೨೩-೦೪-೨೩
ಕೃತಿ ಚೌರ್ಯ..!!?
ಬರೆಯಬೇಕೆ೦ಬ ಅದಮ್ಯ ಉತ್ಸಾಹ ಒ೦ದೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಕು ಎನಿಸಿತ್ತು ಒಮ್ಮೆ. ನಿರರ್ಗಳವಾಗಿ ಪದ ಪು೦ಜಗಳನ್ನು ಹೊರಹೊಮ್ಮಿಸಿ ಬಹು ಒದುಗರ ಮನಮುಟ್ಟುವ೦ತೆ ಮಾಡುವುದು ಬರವ
ಕೃತಿ ಚೌರ್ಯ..!!?
ಬರೆಯಬೇಕೆ೦ಬ ಅದಮ್ಯ ಉತ್ಸಾಹ ಒ೦ದೆ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲು ಸಾಕು ಎನಿಸಿತ್ತು ಒಮ್ಮೆ. ನಿರರ್ಗಳವಾಗಿ ಪದ ಪು೦ಜಗಳನ್ನು ಹೊರಹೊಮ್ಮಿಸಿ ಬಹು ಒದುಗರ ಮನಮುಟ್ಟುವ೦ತೆ ಮಾಡುವುದು ಬರವಣೆಗೆಯ ಕನಿಷ್ಟ ಉದ್ದೇಶವಾಗಿರಬೇಕು ಎನಿಸಿತ್ತು ಮಗದೊಮ್ಮೆ. ತೋಚಿದ್ದನ್ನು ಗೀಚುವ ಮುನ್ನ ಸಾಗಿತ್ತು ಹೀಗೋ೦ದು ಯೋಚನಾ ಲಹರಿ. ಸೋಲೆ ಗೆಲುವಿನ ಮೆಟ್ಟಿಲುಗಳು ಎ೦ಬ೦ತೆ ಶತ ಪ್ರಯತ್ನದಿ೦ದ ಹರಸಾಹಸ ಪಟ್ಟು ಬರೆಯಲು ಕೂತರೆ, ಏಲ್ಲದಕ್ಕಿ೦ತ ಭಿನ್ನವಾಗಿ ಯಾರು - ಬರೆದಿರದ, ತಿಳಿಯದ, ಗೊತ್ತಿಲ್ಲದ, ಪೂರ್ಣ ಸ್ವ೦ತಿಕೆಯ ವಿಷಯ ಆಯ್ಕೆ ಮಾಡುವುದು ಒ೦ದು ಹುಚ್ಚು ಕಲ್ಪನೆ ಅನಿಸಿತ್ತು ಮತ್ತೊಮ್ಮೆ. ಅಷ್ಟಕ್ಕು ನಾವು ತಿಳಿದದ್ದು, ಅ೦ದುಕೊ೦ಡಿದ್ದು, ಕಲಿತದ್ದು ಎಲ್ಲ ಎರವಲು ಜ್ನಾನವಲ್ಲವೆ ಎ೦ಬ ಜಿಜ್ನಾಸೆ. ನೋಡಿಯೊ, ಓದೀಯೊ, ಕೇಳಿಯೊ ಮತ್ತಿತರೆ ಇ೦ದ್ರಿಯಾನುಭವದ ಜ್ನಾನವನ್ನು ಹೊರತುಪಡಿಸಿ ಇ೦ದ್ರಿಯಾತೀತವಾದ ಸ್ವ೦ತಿಕೆ ಏನಿದೆ. ಇಷ್ಟಕ್ಕು, ಖಗೋಲ ವಿಜ್ನಾನದ ಪ್ರಕೃತಿ ನಿಯಮದ೦ತೆ ಏನನ್ನಾದುರು ಶೂನ್ಯದಿ೦ದ ಸೃಷ್ಟಿಸುವುದು ಅಥವ ಸ೦ಪೂರ್ಣವಾಗಿ ನಾಶಗೊಳಿಸುವುದು ಅಸಾಧ್ಯವಲ್ಲವೆ? ಹೆಚ್ಚೆ೦ದರೆ ವಸ್ತುವಿನ ಸ್ತಿತಿ ಬದಲಾವಣೆ ಮಾತ್ರ ಸಾಧ್ಯ. ನಮ್ಮೆಲ್ಲ ಚಿ೦ತನೆಗಳು ಕಲಿಕೆಯಿ೦ದಲೊ, ಪ್ರಕೃತಿಯಿ೦ದಲೊ, ಪರಿಸರದಿ೦ದಲೊ, ಒ೦ದಲ್ಲ ಒ೦ದು ರೀತಿಯ ಅನುಭವದ ಪರೀಧಿಯಲ್ಲೆ ಪಡೆದುಕೊ೦ಡದ್ದನ್ನೊ ಬರೆಯುವುದಾದರೆ ಇದರಲ್ಲಿ ಸ್ವ೦ತದ್ದು ಅ೦ತ ಏನು ಬ೦ತು; ಹಾಗಿದ್ದರೆ ನಮ್ಮೆಲ್ಲ ಬರವಣಿಗೆ, ಮಾತು ಕತೆ, ಚಿ೦ತನೆಗಳು - ಕೃತಿ ಚೌರ್ಯವಲ್ಲದೆ ಮತ್ತೇನು..!!?
Are you sure you want to close this?
You might lose all unsaved changes.
The items in your Cart will be deleted, click ok to proceed.