ಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಮೈಸೂರು ಸಂಸ್ಥಾನವು ಶ್ರೀ ನಾಲ್ವಡಿ ಕೃಷ್ಣರಾಜ ಓಡೆಯರ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ಈ ಸಂಧರ್ಭದಲ್ಲಿ ರಾಜಋಷಿಗಳ ಕನಸಿನ ಕೂಸಾದ ಮೈಸೂರು ವಿಶ್ವವಿದ್ಯಾನಿಲಯ ೧೯೧೯ರಲ್ಲಿ ಪ್ರಾರಂಭಗೊಂಡಿತು. ಶ್ರೀಮನ್ಮಹಾಜರು ದೇಶವಿದೇಶಗಳಿಂದ ಅತ್ಯುನ್ನತ ಪ್ರಾಧ್ಯಾಪಕ ವರ್ಗವನ್ನು ಮೈಸೂರಿನ ಮಹಾರಾಜ ಕಾಲೇಜು ಮತ್ತು ಸೆಂಟ್ರಲ್ ಕಾಲೇಜ್ ಬೆಂಗಳೂರಿಗೆ ನೇಮಿಸಿದರು. ಈ ಅತಿರಥ ಮಹಾರಥರ ಬಗ್ಗೆ ಡಾ।। ಎಸ್. ಎನ್. ಭಗೀರಥ್ ರವರು ಶತಮಾನೋತ್ಸವ ಸಂಧರ್ಭದಲ್ಲಿ ಮೈಸೂರಿನ ಸಂಧ್ಯಾ ಪತ್ರಿಕೆಯಾದ "ಸ್ಟಾರ್ ಆಫ್ ಮೈಸೂರ್”ಗೆ ಈ ವ್ಯಕ್ತಿ ಚಿತ್ರಣಗಳನ್ನು ಲೇಖನದ ರೂಪದಲ್ಲಿ ಪ್ರಕಟಣಗೊಳಿಸಿದರು. ಕೆಲವಾರು ಪಂಡಿತೋತ್ತಮರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ - ಡಾ।। ಆರ್. ಶಾಮಶಾಸ್ತ್ರೀ, ಪ್ರೊ. ಎಂ. ಹಿರಿಯಣ್ಣ, ಡಾ।। ಎಂ. ಹೆಚ್. ಕೃಷ್ಣ, ಡಾ।। ಡಿ. ಎಲ್. ನರಸಿಂಹಾಚಾರ್, ಡಾ।। ಜಿ. ವೆಂಕಟಸುಬ್ಬಯ್ಯ ಮತ್ತು ಡಾ।। ಎಂ. ಷಡಾಕ್ಪರಸ್ವಾಮಿ ಮತ್ತಿತ್ತರು.
ಈ ಇಪ್ಪತ್ತು ಲೇಖನಗಳು ಸಾವಿರಾರು ಓದುಗರ ಮೆಚ್ಚಿಗೆಯನ್ನು ಸಂಪಾದಿಸಿ ಕೊಂಡಿದೆ. ಆ ಸುವರ್ಣಯುಗದಲ್ಲಿ ವಿದ್ವತ್, ಪ್ರತಿಭೆ ಮತ್ತು ಪ್ರಾಮಾಣಿಕತೆ ಎಂಬ ಗುಣಗಳು ಮೆರೆದಾಡಿದವು. ಈಗಿನ ಸಮಾಜದಲ್ಲಿ ಜಾತೀಯತೆ, ಮೂಢ ನಂಬಿಕೆಗಳು, ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆ ತಾಂಡವಾಡುತ್ತಿದೆ. ಈ ಹಿರಿಯರ ಜೀವನ ಚರಿತ್ರೆ ಮತ್ತು ಸಾಧನೆ ನಮ್ಮೆಲರ ಉನ್ನತಿಗೆ ಮಾರ್ಗದರ್ಶನವಾಗಬಹುದು.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners