You cannot edit this Postr after publishing. Are you sure you want to Publish?
Experience reading like never before
Read in your favourite format - print, digital or both. The choice is yours.
Track the shipping status of your print orders.
Discuss with other readersSign in to continue reading.

"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಮೈಸೂರು ಸಂಸ್ಥಾನವು ಶ್ರೀ ನಾಲ್ವಡಿ ಕೃಷ್ಣರಾಜ ಓಡೆಯರ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ಈ ಸಂಧರ್ಭದಲ್ಲಿ ರಾಜಋಷಿಗಳ ಕನಸಿನ ಕೂಸಾದ ಮೈಸೂರು ವಿಶ್ವವಿದ್ಯಾನಿಲಯ ೧೯೧೯ರಲ್ಲಿ ಪ್ರಾರಂಭಗೊಂಡಿತು. ಶ್ರೀಮನ್ಮಹಾಜರು ದೇಶವಿದೇಶಗಳಿಂದ ಅತ್ಯುನ್ನತ ಪ್ರಾಧ್ಯಾಪಕ ವರ್ಗವನ್ನು ಮೈಸೂರಿನ ಮಹಾರಾಜ ಕಾಲೇಜು ಮತ್ತು ಸೆಂಟ್ರಲ್ ಕಾಲೇಜ್ ಬೆಂಗಳೂರಿಗೆ ನೇಮಿಸಿದರು. ಈ ಅತಿರಥ ಮಹಾರಥರ ಬಗ್ಗೆ ಡಾ।। ಎಸ್. ಎನ್. ಭಗೀರಥ್ ರವರು ಶತಮಾನೋತ್ಸವ ಸಂಧರ್ಭದಲ್ಲಿ ಮೈಸೂರಿನ ಸಂಧ್ಯಾ ಪತ್ರಿಕೆಯಾದ "ಸ್ಟಾರ್ ಆಫ್ ಮೈಸೂರ್”ಗೆ ಈ ವ್ಯಕ್ತಿ ಚಿತ್ರಣಗಳನ್ನು ಲೇಖನದ ರೂಪದಲ್ಲಿ ಪ್ರಕಟಣಗೊಳಿಸಿದರು. ಕೆಲವಾರು ಪಂಡಿತೋತ್ತಮರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ - ಡಾ।। ಆರ್. ಶಾಮಶಾಸ್ತ್ರೀ, ಪ್ರೊ. ಎಂ. ಹಿರಿಯಣ್ಣ, ಡಾ।। ಎಂ. ಹೆಚ್. ಕೃಷ್ಣ, ಡಾ।। ಡಿ. ಎಲ್. ನರಸಿಂಹಾಚಾರ್, ಡಾ।। ಜಿ. ವೆಂಕಟಸುಬ್ಬಯ್ಯ ಮತ್ತು ಡಾ।। ಎಂ. ಷಡಾಕ್ಪರಸ್ವಾಮಿ ಮತ್ತಿತ್ತರು.
ಈ ಇಪ್ಪತ್ತು ಲೇಖನಗಳು ಸಾವಿರಾರು ಓದುಗರ ಮೆಚ್ಚಿಗೆಯನ್ನು ಸಂಪಾದಿಸಿ ಕೊಂಡಿದೆ. ಆ ಸುವರ್ಣಯುಗದಲ್ಲಿ ವಿದ್ವತ್, ಪ್ರತಿಭೆ ಮತ್ತು ಪ್ರಾಮಾಣಿಕತೆ ಎಂಬ ಗುಣಗಳು ಮೆರೆದಾಡಿದವು. ಈಗಿನ ಸಮಾಜದಲ್ಲಿ ಜಾತೀಯತೆ, ಮೂಢ ನಂಬಿಕೆಗಳು, ಭ್ರಷ್ಟಾಚಾರ ಮತ್ತು ಅಪ್ರಾಮಾಣಿಕತೆ ತಾಂಡವಾಡುತ್ತಿದೆ. ಈ ಹಿರಿಯರ ಜೀವನ ಚರಿತ್ರೆ ಮತ್ತು ಸಾಧನೆ ನಮ್ಮೆಲರ ಉನ್ನತಿಗೆ ಮಾರ್ಗದರ್ಶನವಾಗಬಹುದು.
It looks like you’ve already submitted a review for this book.
Write your review for this book (optional)
Review Deleted
Your review has been deleted and won’t appear on the book anymore.ಡಾ।। ಭಗೀರಥ್. ಎಸ್. ನಾಗನಾಥ್, ಕನ್ನಡ ಅನುವಾದ- ಶ್ರೀ ಎಚ್. ಎಂ. ನಾಗರಾಜರಾವ್
ಬರಹಗಾರರ ಬಗ್ಗೆ
ಡಾ।। ಭಗೀರಥ್. ಎಸ್. ನಾಗನಾಥ್ ಮೂಲತಃ ಅರಿವಳಿಕೆಯ ತಜ್ಞರಾಗಿರುತ್ತಾರೆ. ಇವರು ಪ್ರಖ್ಯಾತ ಇತಿಹಾಸಕಾರರಾದ ಡಾ।। ಎಸ್. ಶ್ರೀಕಂಠಶಾಸ್ತ್ರೀಯವರ ಮೊಮ್ಮಗ. ವೃತ್ತಿಯಿಂದ ವೈದ್ಯರಾದರೂ ಸಾಹಿತ್ಯ, ಇತಿಹಾಸ, ಸಂಗೀತ ಮತ್ತು ಕಲೆಗಳ ಬಗ್ಗೆ ಆಸಕ್ತಿಯನ್ನು ವೃದ್ಧಿಸಿಕೊಂಡಿದ್ದಾರೆ. ಬಿಡುವಿನ ವೇಳೆಯಲ್ಲಿ ಸಣ್ಣಕಥೆಗಳು ಮತ್ತು ಕವಿತೆಗಳನ್ನು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ. ತಮ್ಮ ಸ್ವಂತ ಪರಿಶ್ರಮದಿಂದ ಅವರ ತಾತನವರನ್ನು ಕುರಿತು ಜಾಲತಾಣವನ್ನು ಸೃಷ್ಟಿಸಿ (www.srikanta-sastri.org) ಸುಮಾರು ಏಳು ಲಕ್ಷ ಅಂತರಾಷ್ಟ್ರೀಯ ಓದುಗರನ್ನು, ಈ ಹತ್ತು ವರ್ಷಗಳಲ್ಲಿ ಆಕರ್ಷಿಸಿದ್ದಾರೆ.
ಈ ಪ್ರಸಕ್ತ ದಶಕದಲ್ಲಿ ಅವರ ಪಿತಾಮಹ ಡಾ।। ಎಸ್. ಶ್ರೀಕಂಠಶಾಸ್ತ್ರೀ ಮತ್ತು ಪಿತೃಗಳಾದ ಪ್ರೊ।। ಎಸ್. ನಾಗನಾಥ್ ರವರ ಕೃತಿಗಳ ಪ್ರಕಾಶನ ಮತ್ತು ಮರು ಮುದ್ರಣ ಕಾರ್ಯದಲ್ಲಿ ನೆರವಾಗಿದ್ದಾರೆ. ಅವರ ನೆಚ್ಚಿನ ಅಧ್ಯಯನದ ಸಂಶೋಧನ ಕಾರ್ಯವು "ಸಿಂಧು - ಸರಸ್ವತಿ ಕಣಿವೆಯ ಸಾಂಸ್ಕೃತಿಕ ಐತಿಹಾಸಿಕ" ವಿಷಯಕ್ಕೆ ಸಂಬಂಧಪಟ್ಟದಾಗಿದೆ.
India
Malaysia
Singapore
UAE
The items in your Cart will be deleted, click ok to proceed.