Share this book with your friends

Ekottara Shatasthala Saramrita / ಏಕೋತ್ತರಶತಸ್ಥಲಸಾರಾಮೃತ Sarana satiku vachanas / ಶರಣರ ಸಟೀಕು ವಚನಗಳು

Author Name: Prof. C. Mahadevappa MA | Format: Paperback | Genre : Poetry | Other Details

ಏಕೋತ್ತರ ಶತಸ್ಥಲ ಸಾರಾಮೃತ  ಮುಖ್ಯವಾಗಿ ಅಲ್ಲಮಪ್ರಭು, ಬಸವೇಶ್ವರರು ಹಾಗೂ ಚನ್ನಬಸವಣ್ಣ ಮೊದಲಾದ  ಶರಣರು ರಚಿಸಿದ ಬೆಡಗಿನ ವಚನಗಳಿಗೆ ಟೀಕು  ಕೊಡಲಾದ  ತತ್ತ್ವ  ಗ್ರಂಥ.  ಈ ವಚನಗಳನ್ನು ಸಂಪಾದಿಸಿ ಸಂಗ್ರಹ ರೂಪ ಕೊಟ್ಟ ಕೀರ್ತಿ ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿಗಳದು. ಈ ಸಂಪಾದನೆಯು ಗೂಳೂರು  ಸಿದ್ಧವೀರಣ್ಣೊಡೆಯರ   ಶೂನ್ಯ ಸಂಪಾದನೆಯನ್ನು ಆಧರಿಸಿದೆ ಹಾಗೂ  ಗೂಢ ತಾತ್ತ್ವಿಕ ಚಿಂತನೆಯ ವಿವರಣಾತ್ಮಕ ಟೀಕೆಯನ್ನು ಒದಗಿಸಿದೆ.

ಈ ಕೃತಿಯ ಪ್ರಾರಂಭ ಅಲ್ಲಮಪ್ರಭುಗಳ ವಚನದಿಂದ ಆಗಿದೆ.  ನಾಡಿನ ಶರಣರ ನೇರ ಹಾಗೂ ಜಾಣ್ಮೆಯ ನುಡಿಗಟ್ಟುಗಳು ಗೂಢಾರ್ಥಸ್ವರೂಪವಾಗಿದ್ದ ಕಾರಣ ಅದರ ಮರ್ಮವನ್ನರಿಯಲು  ಟೀಕಾ ಗ್ರಂಥದ  ಅಗತ್ಯ ಬಿದ್ದಿತು. 

ಇದು ಪಿಂಡಸ್ಥಲದಿಂದ ಪ್ರಾರಂಭವಾಗಿ ನೂರೊಂದನೆಯ ಜ್ಞಾನಶೂನ್ಯಸ್ಥಲದಲ್ಲಿ 393 ನೇ ವಚನದಿಂದ ಮುಕ್ತಾಯಗೊಳ್ಳುವ ಶಿವಾನುಭವ ಗ್ರಂಥ.

Read More...
Paperback
Paperback 349

Inclusive of all taxes

Delivery

Item is available at

Enter pincode for exact delivery dates

Also Available On

ಪ್ರೊ. ಸಿ. ಮಹಾದೇವಪ್ಪ. ಎಂ.ಎ.

“ತಾಳೆಗರಿ ಹಾಗೂ ಹಸ್ತಪ್ರತಿಗಳಲ್ಲಿ ಅಡಗಿದ್ದ ಈ ಗ್ರಂಥವು ಶತಾಯುಷಿ ಪ್ರೊ|| ಸಿ.  ಮಹಾದೇವಪ್ಪನವರು  ಅವರ ಯೌವನದ ದಿನಗಳಲ್ಲಿ ಸಂಗ್ರಹಿಸಿ ಸಂಪಾದಿಸಿದ ಮೊದಲ ಕೃತಿಗಳಲ್ಲಿ ಹಲವು. ದಶಕಗಳ ಹಿಂದೆಯೇ ಪ್ರಕಟಣೆಗೆ ಅಣಿಯಾಗಿದ್ದರೂ  ಶ್ರೀಯುತರ 101ನೇ ವರ್ಷದಲ್ಲಿ ಏಕೋತ್ತರ ಶತಸ್ಥಲ ಗ್ರಂಥ   ಹೊರಬರುತ್ತಿರುವುದು  ಕಾಕತಾಳೀಯ ಎನ್ನುವಂತೆ ಆಗಿ ಸಮಾಧಾನಕರ ಸಂಗತಿಯಾಗಿದೆ.”

ದಯವಿಟ್ಟು chenna.nagaraj@gmail.com ಗೆ ಸಂಪರ್ಕಿಸಲು ಮುಕ್ತವಾಗಿರಿ

Read More...

Achievements

+1 more
View All