You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಏಕೋತ್ತರ ಶತಸ್ಥಲ ಸಾರಾಮೃತ ಮುಖ್ಯವಾಗಿ ಅಲ್ಲಮಪ್ರಭು, ಬಸವೇಶ್ವರರು ಹಾಗೂ ಚನ್ನಬಸವಣ್ಣ ಮೊದಲಾದ ಶರಣರು ರಚಿಸಿದ ಬೆಡಗಿನ ವಚನಗಳಿಗೆ ಟೀಕು ಕೊಡಲಾದ ತತ್ತ್ವ ಗ್ರಂಥ. ಈ ವಚನಗಳನ್ನು ಸಂಪಾದಿಸಿ ಸಂಗ್ರಹ ರೂಪ ಕೊಟ್ಟ ಕೀರ್ತಿ ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿಗಳದು. ಈ ಸಂಪಾದನೆಯು ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯನ್ನು ಆಧರಿಸಿದೆ ಹಾಗೂ ಗೂಢ ತಾತ್ತ್ವಿಕ ಚಿಂತನೆಯ ವಿವರಣಾತ್ಮಕ ಟೀಕೆಯನ್ನು ಒದಗಿಸಿದೆ.
ಈ ಕೃತಿಯ ಪ್ರಾರಂಭ ಅಲ್ಲಮಪ್ರಭುಗಳ ವಚನದಿಂದ ಆಗಿದೆ. ನಾಡಿನ ಶರಣರ ನೇರ ಹಾಗೂ ಜಾಣ್ಮೆಯ ನುಡಿಗಟ್ಟುಗಳು ಗೂಢಾರ್ಥಸ್ವರೂಪವಾಗಿದ್ದ ಕಾರಣ ಅದರ ಮರ್ಮವನ್ನರಿಯಲು ಟೀಕಾ ಗ್ರಂಥದ ಅಗತ್ಯ ಬಿದ್ದಿತು.
ಇದು ಪಿಂಡಸ್ಥಲದಿಂದ ಪ್ರಾರಂಭವಾಗಿ ನೂರೊಂದನೆಯ ಜ್ಞಾನಶೂನ್ಯಸ್ಥಲದಲ್ಲಿ 393 ನೇ ವಚನದಿಂದ ಮುಕ್ತಾಯಗೊಳ್ಳುವ ಶಿವಾನುಭವ ಗ್ರಂಥ.
ಪ್ರೊ. ಸಿ. ಮಹಾದೇವಪ್ಪ. ಎಂ.ಎ.
“ತಾಳೆಗರಿ ಹಾಗೂ ಹಸ್ತಪ್ರತಿಗಳಲ್ಲಿ ಅಡಗಿದ್ದ ಈ ಗ್ರಂಥವು ಶತಾಯುಷಿ ಪ್ರೊ|| ಸಿ. ಮಹಾದೇವಪ್ಪನವರು ಅವರ ಯೌವನದ ದಿನಗಳಲ್ಲಿ ಸಂಗ್ರಹಿಸಿ ಸಂಪಾದಿಸಿದ ಮೊದಲ ಕೃತಿಗಳಲ್ಲಿ ಹಲವು. ದಶಕಗಳ ಹಿಂದೆಯೇ ಪ್ರಕಟಣೆಗೆ ಅಣಿಯಾಗಿದ್ದರೂ ಶ್ರೀಯುತರ 101ನೇ ವರ್ಷದಲ್ಲಿ ಏಕೋತ್ತರ ಶತಸ್ಥಲ ಗ್ರಂಥ ಹೊರಬರುತ್ತಿರುವುದು ಕಾಕತಾಳೀಯ ಎನ್ನುವಂತೆ ಆಗಿ ಸಮಾಧಾನಕರ ಸಂಗತಿಯಾಗಿದೆ.”
ದಯವಿಟ್ಟು chenna.nagaraj@gmail.com ಗೆ ಸಂಪರ್ಕಿಸಲು ಮುಕ್ತವಾಗಿರಿ
The items in your Cart will be deleted, click ok to proceed.